ಕಡರಮಂಡಲಗಿ ಶ್ರೀ ಕಾಂತೇಶ ಸ್ವಾಮಿ
ಶ್ರೀ ಕನಕ
ದಾಸ
- ಸಣ್ಣ ಪ್ರಾಂತ್ಯದ ಮುಖ್ಯಸ್ಥನಾಗಿ ಜನಿಸಿದ ಕನಕ ದಾಸನು ಯುದ್ಧದಲ್ಲಿ
ತೀವ್ರವಾಗಿ ಗಾಯಗೊಂಡನು, ಆಗ ಶ್ರೀ ವೆಂಕಟೇಶ
ಸ್ವಾಮಿಯು ಅವರ ಕನಸಿನಲ್ಲಿ ಬಂದು
ತನ್ನ ಭಕ್ತನಾಗಲು ಪ್ರೇರೇಪಿಸಿದನು ಮತ್ತು ಅವನ ಎಲ್ಲಾ ದೈಹಿಕ
ಕಾಯಿಲೆಗಳನ್ನು ಗುಣಪಡಿಸಿದನು. ಕನಕದಾಸರು ತಿರುಪತಿಗೆ ಭೇಟಿ ನೀಡಿದಾಗ, ಶ್ರೀ
ವೆಂಕಟೇಶ ಸ್ವಾಮಿಯು ಮೊದಲು ಕಾಂತೇಶನ ದರ್ಶನ ಪಡೆದು ನಂತರ ನನ್ನನ್ನು (ವೆಂಕಟೇಶ)
ನೋಡಲು ಬಾ ಎಂದು ಸೂಚಿಸಿದನು.
ಮತ್ತೊಂದು ಬಾರಿ, ಕನಕ ದಾಸರು ಅನಾರೋಗ್ಯಕ್ಕೆ
ಒಳಗಾದಾಗ, ಕಾಂತೇಶನು ತನ್ನ ಎಲ್ಲಾ ಕಾಯಿಲೆಗಳನ್ನು
ಗುಣಪಡಿಸಿದನು ಎಂದು ನಂತರ ಕನಕ
ದಾಸ ಅವರ ವಿವಿಧ ಕಾವ್ಯ
ಸಂಯೋಜನೆಗಳಲ್ಲಿ ಕಾಂತೇಶನನ್ನು ಹೊಗಳಿದ್ದಾರೆ. ದಕ್ಷಿಣ ಭಾರತದಲ್ಲಿ ಕಾಂತೇಶನ ಶಕ್ತಿಯನ್ನು ಜನಪ್ರಿಯಗೊಳಿಸಿದ ಮೊದಲ ಭಕ್ತ ಕನಕ
ದಾಸ. ಈಗಲೂ ಸಹ ಪ್ರತಿವರ್ಷ
ಏಪ್ರಿಲ್ 13 ರಂದು ಕನಕ ದಾಸರಿಗೆ
ದೊಡ್ಡ ಗೌರವ ಸಲ್ಲಿಸಲಾಗುತ್ತದೆ. ಕನಕದಾಸರು
ತಮ್ಮ ಮೋಹನ ತರಂಗಿಣಿಯನ್ನು ಇಲ್ಲಿಯೆ
ಬರೆದರು ಎಂದು ಸಹ ಹೆಳಲಾಗುತ್ತದೆ.
ಅಡವಿ ರಾಮ
ದಾಸ
- ರಾಮ ದಾಸನು ಕಾಂತೇಶನ ಕಟ್ಟಾ ಭಕ್ತ, ಒಮ್ಮೆ ಅವನು ಹಸುವಿನ ಮೇಲೆ
ಒಂದು ಸಣ್ಣ ಕಲ್ಲುನ್ನು ಎಸೆದಾಗ,
ಹಸು ಸತ್ತಂತೆ ಬೀಳುತ್ತದೆ, ಹಸುವನ್ನು ನೋಡಿದ ರಾಮ ದಾಸ ತುಂಬಾ
ಖಿನ್ನನಾಗಿ, ತಾನು ಮಾಡಿದ್ದು ತಪ್ಪೆಂದು
ಭಾವಿಸಿ ಶ್ರೀ ಕಾಂತೇಶನನ್ನು ಪ್ರಾರ್ಥಿಸಲು
ಪ್ರಾರಂಭಿಸಿದನು ಆಗ ಸತ್ತಂತೆ
ಬಿದ್ದ ಹಸುಇದ್ದಕ್ಕಿದ್ದಂತೆ ಜೀವಂತವಾಗಿ
ಎದ್ದು ನಿಂತಿತೆಂದು ಹೇಳಲಾಗುತ್ತದೆ.
ಮೈಸೂರು ಭೀಮಾ
ದಾಸ
- ಮಕ್ಕಳಿಲ್ಲದ ಪೋಷಕರು ಕಾಂತೇಶನನ್ನು ದೀರ್ಘಕಾಲ ಪ್ರಾರ್ಥಿಸಿದಾಗ ಭೀಮಾ ದಾಸ ಜನ್ಮ
ಪಡೆದರು, ಕಾಂತೇಶನು ಭೀಮಾ ದಾಸನ ಪೋಷಕರಿಗೆ
ಈ ಮಗುವನ್ನು ತನಗೆ ಕೊಡುವಂತೆ ಕೇಳಿದನು.
ಆದರೆ ಮಗುವಿನ ಮೇಲಿನ ಪ್ರೀತಿಯಿಂದಾಗಿ ದೇವರಿಗೆ ಅವರು ನೀಡಿದ ಭರವಸೆಯನ್ನು
ಅವರು ಮರೆತಿದ್ದರು. ಭೀಮಾ ಆಚಾರ್ಯನ ಕಣ್ಣುಗಳ ಗಾಯಗೊಂಡವು.
ಪೋಷಕರು ಮತ್ತೆ ದೇವರನ್ನು ಪ್ರಾರ್ಥಿಸಿದರು ಮತ್ತು ಮಗನನ್ನು
ದೇವರಿಗೆ ಕೊಡುವ ಭರವಸೆ ನೀಡಿದರು. ದೇವರು ಭೀಮಾ ಆಚಾರ್ಯನಿಗೆ ದೃಷ್ಟಿಯನ್ನು
ಕೊಟ್ಟನು. ಮದುವೆಯಾದ ತರುವಾಯ ಭೀಮಾ ದಾಸನು ಆಧ್ಯಾತ್ಮಿಕ
ಆಸಕ್ತಿಯನ್ನು ಬೆಳೆಸಿಕೊಂಡನು ಹಾಗೂ ಪವಾಡಗಳನ್ನು ಮಾಡಲು
ಪ್ರಾರಂಭಿಸಿದರು ಮತ್ತು ಶ್ರೀ ಹರಿಯನ್ನು
ಹೊಗಳಿದರು. ಅವರು ಜನರ ತೊಂದರೆಗಳನ್ನು
ದೂರಮಾಡಿದರು ಹಗೂ ರೋಗಗಳನ್ನು ಗುಣಪಡಿಸಿದರು.
ಮೈಸೂರು ರಾಜನ ಎದುರು ದೇವಾಲಯದ
ಗೋಪುರದಿಂದ ಹಾರಿದಾಗ ಅವನ ಆಧ್ಯಾತ್ಮಿಕ ಶಕ್ತಿ
ಎಲ್ಲರಿಗೂ ಅರಿವಾಯಿತು. ಮೈಸೂರು ರಾಜನು ಅನೇಕ ಉಡುಗೊರೆಗಳನ್ನು ಕೊಟ್ಟನು
ಆದರೆ ಭೀಮಾ ಆಚಾರ್ಯನು ದೇವರನ್ನು
ಆರಾಧಿಸಲು ಬೇಕಾದ ವಸ್ತುಗಳನ್ನು ಕಳುಹಿಸುವಂತೆ ರಾಜನಿಗೆ ಹೇಳಿದನು. ಅವರ ಕುಟುಂಬ ವಂಶಸ್ಥರನ್ನು
ಈಗ ಕದರಮಡಲಗಿಯ ದಾಸರು ಎಂದೂ ಕರೆಯುತ್ತಾರೆ.

Comments
Post a Comment